Wednesday, 27 June 2012


ಮಿತ್ರರೇ,ಜೀವನ ಸೀಮಿತವಾಗಿದೆ!

          ಸುಮಾರು ಶೇ.೫೦ ರಶ್ಟು ಯುವಕರು ತಮ್ಮ ದಿನನಿತ್ಯದ  ಶೇ.೭೦ ರಶ್ಟೂ ಸಮಯವನ್ನು ತಮ್ಮಜೀವನಕ್ಕೆ ಎಳ್ಳಶ್ಟೂ ಉಪಯೊಗ ಇಲ್ಲದ ವಿಶಯಗಳಲ್ಲಿ ಹಾಳು ಮಾಡುತ್ತಿದ್ದಾರೆ. ಉದಾ.. ತಾಸುಗಟ್ಟಲೆ ಅಧ್ಯಯನ ಇಲ್ಲದ ವಿಶಯಗಳ ಬಗ್ಗೆ ಹರಟೆ ಹೊಡೆಯುವುದು(ಅದೂ ಮಿತಿಮೀರಿ), ದೂರಚಿತ್ರವಾಹಿನಿ ನೋಡುವುದು, ಬೀದಿಯಲ್ಲಿ ಇತರರಿಗೆ ತೊಂದರೆಯಾಗುವಂತೆ ಗಂಟೆಗಟ್ಟಲೆ ನಿಂತುಕೊಳ್ಳುವುದು.ಮುಖದರ್ಶನಕ್ಕಾಗಿ ಊರೆಲ್ಲ ಸುತ್ತಾಡುವುದು.ಹುಡುಗಿಯರ ಬಗ್ಗೆ ಚರ್ಚೆಮಾಡುತ್ತಾ ನಿಲ್ಲುವುದು.ಮಿತ್ರರೇ, ನಿಜವಾಗಿ ಇದರಲ್ಲೆನಾದರು ಅರ್ಥವಿದೆಯೇ? ಇದರಲ್ಲಿನ ಯಾವುದಾದರೂ ನಿಮ್ಮ ಜೀವನವಿಡೀ ಸಹಾಯ ಮಾಡುವುದೇ? ಹಣಕ್ಕಿಂತ ಯಾವ ಸಮಯಕ್ಕೆ ಹೆಚ್ಚಿನ ಮಹತ್ವವಿದೆಯೋ ಮತ್ತು ಯಾವ ವಯಸ್ಸು ನಿಮ್ಮ ಜೀವನ ನಿರ್ಮಾಣಕ್ಕಾಗಿ ಮಹತ್ವದ್ಧಾಗಿದೆಯೋ ಅಂತಹ ಯುವಾವಸ್ತೆಯ ಸಮಯವನ್ನು ನೀವೆಲ್ಲ ಕಾಗದದಂತೆ ಹಾರಿಸುತ್ತಿದ್ದೀರಿ. ನೆನಪಿಡಿ!!! ಕಳೆದುಹೋದ ಸಮಯವು  ಮತ್ತೆ ಹಿಂದಿರುಗಿ ಬರಲಾರದು ಮತ್ತು ಆನಂತರ  ಪಶ್ಚ್ತ್ತಾತ್ತಾಪ ಪಟ್ತರೆ ಅದರಲ್ಲೆನೂ ಅರ್ಥವಿಲ್ಲ. ಮಿತ್ರರೇ, ಕಳೆದುಹೋದ ಕ್ಶಣವು ಹಿಂತಿರುಗಿ ಸಿಗುವುದಿಲ್ಲ ಎಂಬುದನ್ನು ಅರಿತುಕೊಳ್ಳಿ ಮತ್ತು ಸಮಯವನ್ನು ವ್ಯರ್ಥವಾಗಿ ಕಳೆಯಬೇಡಿ!!.......  plz

Thursday, 14 June 2012


ನಿನ್ನ ಕನಸು

ನಿನ್ನ ಕನಸಿಂದ ಆಚೆ ಬರುವುದು ಹೇಗೆ
ನಿನ್ನ ಪ್ರೀತಿಗೆ ಹೀಗೆ ನನ್ನನೊಡ್ಡಿ

ನಿನ್ನ ಪ್ರೇಮವು ಎನಗೆ ಒಂದಗುಲದ ಜಾಗ
ಕನಸಿನಂತಃಪುರದ ತೋಟದೊಳಗೆ

ನಿನ್ನೊಲವಿನ ಸ್ಪರ್ಶ ನೆನಪಾಗಿ ಕಾಡಿದರೆ  
ಮ್ಯಯೊಳಗೆ ಮಿಂಚು ಹೊಳಪು

ನಿನ್ನ ಕನಸಿಂದ ಆಚೆ ಬಾರೆನು ನಾನು
ಕನವರಿಸಿ ನುಡಿಸುವೆ ಹೊಸ ರಾಗವನು

ನಿನ್ನ ನೆನಪಿಗೆ ಕಟ್ಟಲಾರೆ ಪಂಜರವ
ನಿನಗೊ ತಿಳಿದಿದೆ ನಮ್ಮಿಬ್ಬರ ಪ್ರೀತಿ

ತಡೆಯಲಾರಿರಿ ಇನ್ನೊ ನನ್ನ ಹೀಗೆ ಅಡ್ಡಗಟ್ಟಿ.
ಶ್ರೀ

Sunday, 10 June 2012

ಶ್ರೀ



shree
ಜೀವನದ ಪಯಣದಲಿ ನೂರೊಂದು ತಿರುವುಗಳು
ತಿರುವು ತಿರುವಿನಲ್ಲೂ ಹೊಸ ಕಲಿಕೆಯ ಒಲವು
ಹೊಸ ಸಂಭಂದಗಳ ಮೆರಗು
ಕೆಲವು ಅನಿರಿಕ್ಶಿಥ ಆದರು ರೂಮಾಂಚಕ
ಇದ್ದಶ್ಟೂ ದಿನ ಎನಾದರೂ ಸಾದಿಸುವ ಹಂಬಲ
ಕೊನೆಯ ಪಯಣದಲಿ ಎನನ್ನು ಸಾದಿಸದೆ ಹೊಗುವೆನೆಂಬ
ಕೊರಗು ಒಟ್ಟಾರೆ ಈ ಎರಡು ದಿನದ ಪಯಣದಲಿ
ಬರಿ ನೆನಪುಗಳೇ ಶಾಶ್ವಥ...